ಅಶ್ವತ್ಥಾಮ

 


ಬಾಳು ಬರಿದಾಗಿದೆ , ಬುದ್ಧಿ ಮಂಕಾಗಿದೆ 

ಕಣ್ಣೆರಡು ಸಾಲದೇ ಈ ನೋವಿಗೆ !

ಮೂರನೇ ವಜ್ರ ಕೊಡುತ್ತಿರುವುದು ಕಷ್ಟ 

ಸಹಿಸಲು ಬೇಕು ಇನ್ನೊಂದು ಜನನ 


ಅಮರಾಸೆಗೆ ಸೋತು ಬೇಡುವರು ಸುಧೆಯ 

ವರವನ್ನು ಪಡೆದು ಅನುಭವಿಸುವರೇ ಖುಷಿಯ ?

ಯಮಲೋಕದ ದಾರಿ ತ್ಯಜಿಸುವವರೆಲ್ಲ ,

ನಾನಿಲ್ಲಿ ನರಳುವೆ ಜೀವನವ ಪಡೆದು !


ಪಾಪಕ್ಕೆ ಶಿಕ್ಷೆ ,ಜೀವನದ ಭಿಕ್ಷೆ 

ಒಬ್ಬಂಟಿ ಆಗಿರುವೆ ಎನಗಾರು ಇಲ್ಲ

ರೋಗವೇ ತಿನ್ನುತಿದೆ ಬಾಳ ಹಸಿ ನೆನಪು

ಗಾಯಗಳು ರಕ್ತ ಭೋಜಿಸಿ ತೃಪ್ತಿ ಪಡೆದಿವೆ .


ಶಾಪ ದೊರಕಿದೆ ಎನಗೆ ,ಶಾಪ ದೊರಕಿದೆ 

ಬಾಳೆಂಬ ನೋವೇ ಶಾಪವಾಗಿದೆ

ದೇವರಿಗೆ ಶರಣಾಗದಿರನು ಈ ಮೂರ್ಖ 

ಅಶ್ವತ್ಥಾಮ ಸಾಯುವನು ದಿನ ಪ್ರತಿನಿತ್ಯ 


Comments

Popular posts from this blog