ಅಶ್ವತ್ಥಾಮ
ಬಾಳು ಬರಿದಾಗಿದೆ , ಬುದ್ಧಿ ಮಂಕಾಗಿದೆ
ಕಣ್ಣೆರಡು ಸಾಲದೇ ಈ ನೋವಿಗೆ !
ಮೂರನೇ ವಜ್ರ ಕೊಡುತ್ತಿರುವುದು ಕಷ್ಟ
ಸಹಿಸಲು ಬೇಕು ಇನ್ನೊಂದು ಜನನ
ಅಮರಾಸೆಗೆ ಸೋತು ಬೇಡುವರು ಸುಧೆಯ
ವರವನ್ನು ಪಡೆದು ಅನುಭವಿಸುವರೇ ಖುಷಿಯ ?
ಯಮಲೋಕದ ದಾರಿ ತ್ಯಜಿಸುವವರೆಲ್ಲ ,
ನಾನಿಲ್ಲಿ ನರಳುವೆ ಜೀವನವ ಪಡೆದು !
ಪಾಪಕ್ಕೆ ಶಿಕ್ಷೆ ,ಜೀವನದ ಭಿಕ್ಷೆ
ಒಬ್ಬಂಟಿ ಆಗಿರುವೆ ಎನಗಾರು ಇಲ್ಲ
ರೋಗವೇ ತಿನ್ನುತಿದೆ ಬಾಳ ಹಸಿ ನೆನಪು
ಗಾಯಗಳು ರಕ್ತ ಭೋಜಿಸಿ ತೃಪ್ತಿ ಪಡೆದಿವೆ .
ಶಾಪ ದೊರಕಿದೆ ಎನಗೆ ,ಶಾಪ ದೊರಕಿದೆ
ಬಾಳೆಂಬ ನೋವೇ ಶಾಪವಾಗಿದೆ
ದೇವರಿಗೆ ಶರಣಾಗದಿರನು ಈ ಮೂರ್ಖ
ಅಶ್ವತ್ಥಾಮ ಸಾಯುವನು ದಿನ ಪ್ರತಿನಿತ್ಯ
Comments
Post a Comment